ಶ್ರಾವಣ ಮಾಸದ ಮೂರನೇ ಸೋಮವಾರವಾದ ಇಂದು
ಶ್ರೀ ದೇವರಲ್ಲಿ ಶತರುದ್ರ ಪಾರಾಯಣ,ಹವನ, ಮಹಾಪೂಜಾ ಹಾಗೂ ಬಲಿ ಉತ್ಸವವು ವಿಜೃಂಭಣೆಯಿಂದ, ಶ್ರದ್ಧಾ,ಭಕ್ತಿ ಪೂರ್ವಕವಾಗಿ ನೆರವೇರಿತು.
ಮತ್ತು ತ್ರಿದೇವತಾ ಆರಾಧನಾ ಅಂಗವಾಗಿ ನಡೆದ ಸಂಕಷ್ಟಿ ಗಣಹವನ ಕಾರ್ಯಕ್ರಮವೂ ಜರುಗಿತು.
ನೂರಾರು ಭಕ್ತರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿ, ಪರ್ಯಾಪ್ತಿ ಭೋಜನದಲ್ಲಿ ಪಾಲ್ಗೊಂಡು ಕೃತಾರ್ಥರಾದರು.
ಹರ ಹರ ಮಹಾದೇವ🔱





