ಶ್ರೀಕ್ಷೇತ್ರದಲ್ಲಿ “ದಿವ್ಯಾಷ್ಟಬಂಧ ವರ್ಧಂತಿ ಉತ್ಸವ”
ಪ್ರೀಯ ಭಕ್ತರೇ, ವಿ.ಸೂ:
ಶ್ರೀಕ್ಷೇತ್ರದಲ್ಲಿ “ದಿವ್ಯಾಷ್ಟಬಂಧ ವರ್ಧಂತಿ ಉತ್ಸವ” Read More »
ವಿಶ್ವಾವಸು ಸಂವತ್ಸರ ಪಾಲ್ಗುಣ ಶುದ್ಧ ಏಕಾದಶೀ ದಿನಾಂಕ ೨೭-೦೨-೨೦೨೬ ರಂದು ಮಹಾಸ್ಯಂದನ ( ರಥೋತ್ಸವ) ಉತ್ಸವವು ನೆರವೇರಿತು..ದಿನಾಂಕ ೨೦- ೨-೨೦೨೬ ರಿಂದ ಕಂಕಣ ಬಂಧನ ದಿಂದ ಪ್ರಾರಂಭವಾಗಿ ೨೮-೨-೨೦೨೬ ಪರ್ಯಂತ ಅತೀ ವಿಜೃಂಭಣೆ ಇಂದ ನಿತ್ಯವೂ ಒಂದೊಂದು ಉತ್ಸವ ದಿಂದ ಕೂಡಿ , ಬೀಳಗಿ ಸೀಮೆಯ ಎಲ್ಲ ಸದ್ಭಕ್ತರ ಸಹಕಾರದ ಮೇರೆಗೆ ಈ ಕಾರ್ಯಕ್ರ ಮವು ಸಂಪನ್ನವಾಯಿತುಯಜಮಾನರು – ಚಂದ್ರಶೇಖರ ಮಂಜಯ್ಯ ಹೆಗಡೆತಾಂತ್ರಿಕರು- ಅನಂತ ರಾಮಚಂದ್ರ ಭಟ್ಟ
ಶ್ರೀಕ್ಷೇತ್ರದಲ್ಲಿ ಎಲ್ಲಾ ಭಕ್ತರ ಸಹಕಾರದೊಂದಿಗೆ ಮಹಾಸ್ಯಂದನೋತ್ಸವವು (ರಥೋತ್ಸವವು) ನೆರವೇರಿತು. Read More »
ವಿಶ್ವಾವಸು ಸಂವತ್ಸರದ ವಾರ್ಷಿಕ ಮಹಾರಥೋತ್ಸವದ ಧಾರ್ಮಿಕ ಕಾರ್ಯಕ್ರಮಗಳು ಪ್ರಾರಂಭವಾಗಿದ್ದು, ಈ ದಿನ ಫೆಬ್ರವರಿ 20 ಶುಕ್ರವಾರ, ಪ್ರಾರ್ಥನೆ, ಗಣಪತಿ ಪೂಜೆ, ಸಂಕಲ್ಪ, ಕೌತುಕ ಬಂಧನ, ಗಣಹವನ, ಧ್ವಜಾರೋಹಣ ಮತ್ತು ಇನ್ನಿತರ ಕಾರ್ಯಕ್ರಮಗಳು ನಡೆದವು.
ಇಟಗಿಯಲ್ಲಿ ರಥೋತ್ಸವ ಪ್ರಾರಂಭ Read More »
ಮಹಾಶಿವರಾತ್ರಿಯ ಪರ್ವಕಾಲದಲ್ಲಿ ಸಿದ್ದಾಪುರ ತಾಲ್ಲೂಕಿನ ಬಿಳಗಿ ಸೀಮಾ ಮಹತೋಬಾರ ಶ್ರೀ ರಾಮೇಶ್ವರ ಶ್ರೀ ಅಮ್ಮನವರು ಹಾಗೂ ಶ್ರೀ ವಿಠ್ಠಲ ದೇವಸ್ಥಾನ ಶ್ರೀಕ್ಷೆತ್ರ ಇಟಗಿಯಲ್ಲಿ ನೂತನ ಪುಷ್ಪರಥದ ಭೂ ಸ್ಪರ್ಶ ಕಾರ್ಯಕ್ರಮ ಮತ್ತು ಶತರುದ್ರ ಪಾರಾಯಣ ಮತ್ತು ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ನೇರವೇರಿತು. ಬಹಳ ಹಿಂದಿನ ಕಾಲದ ಪುಷ್ಪರಥವು ಜೀರ್ಣಾವಸ್ತೆಗೆ ತಲುಪಿದ್ದು,2025 ಎಪ್ರಿಲ್ ನಲ್ಲಿ ನಡೆದ ಅಷ್ಟಬಂಧ ಮಹೋತ್ಸವದ ನಂತರದಲ್ಲಿ ನೂತನ ಪುಷ್ಪರಥವನ್ನು ಮಾಡುವ ಸಂಕಲ್ಪವನ್ನು ಆಡಳಿತ ಕಮೀಟಿ ಮಾಡಿತ್ತು.ಅದರಂತಯೇ ವಿಶ್ವಾವಸು ಸಂವತ್ಸರದ ಆರಂಭದಲ್ಲಿ ಮಾಡಿದ್ದ ಸಂಕಲ್ಪದಂತೇ ವಿಶ್ವಾವಸು
ನೂತನ ಪುಷ್ಪರಥದ ಭೂಸ್ಪರ್ಶ :ಶ್ರೀಕ್ಷೇತ್ರ ಇಟಗಿ Read More »
ಶ್ರೀಕ್ಷೇತ್ರ ಇಟಗಿಗೆ ನೂತನವಾಗಿ ನಿರ್ಮಿತ ಗಜವಾಹನ ಪುಷ್ಪರಥೋತ್ಸವವು ದಿನಾಂಕ 08-02-2026 ರವಿವಾರ ತಡರಾತ್ರಿ ಬಂದಿರುತ್ತದೆ. ಶ್ರೀದೇವಸ್ಥಾನದ ಪುಷ್ಪರಥ(ಸಣ್ಣ ರಥ) ವು ಕಾಲಾನುಕ್ರಮೇಣ ಜೀರ್ಣವಾಗಿರುದರಿಂದ ಹೊಸದಾಗಿ ರಥವನ್ನು ನಿರ್ಮಿಸುವ ಕಾರ್ಯವನ್ನು ಶ್ರೀದೇವಸ್ಥಾನದ ಮೊಕ್ತೇಸರ ಮಂಡಳಿಯು ಭಕ್ತರ ಸಲಹೆಯೊಂದಿಗೆ ಮುಂದಾಗಿತ್ತು. ಸುಮಾರು 30 ಲಕ್ಷದ ವೆಚ್ಚದಲ್ಲಿ ರಥವನ್ನು ನಿರ್ಮಿಸಿದ್ದು, ಪರಮೇಶ್ವರ ಆಚಾರಿ ಕುಂದಾಪುರ ಇವರ ಸಮ್ಮುಖದಲ್ಲಿ ಸುಂದರವಾದ ರಥವು ಶ್ರೀಕ್ಷೇತ್ರ ಇಟಗಿಗೆ ಬಂದಿಳಿದಿರುತ್ತದೆ.
ಶ್ರೀದೇವಸ್ಥಾನಕ್ಕೆ ನೂತನ ಪುಷ್ಪರಥ Read More »
ಬಿಳಗಿನ ಸೀಮಾ ಮಹತೋಬಾರ ಶ್ರೀರಾಮೇಶ್ವರ ಶ್ರೀ ಅಮ್ಮನವರು ಮತ್ತು ಶ್ರೀ ವಿಠ್ಠಲ ದೇವಸ್ಥಾನ ಶ್ರೀಕ್ಷೇತ್ರ ಇಟಗಿಯ ಮಹಾರಥೋತ್ಸವವು ಇದೇ ಬರುವ ಫೆಬ್ರವರಿ 27 ರಂದು ಜರುಗಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀದೇವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಕೇಳಿಕೊಳ್ಳುತ್ತಾ. ಸರ್ವರನ್ನೂ ಈ ಮೂಲಕ ಆಮಂತ್ರಿಸುತ್ತಿದ್ದೇವೆ.
ಶ್ರೀ ರಾಮೇಶ್ವರ ದೇವಸ್ಥಾನ ಶ್ರೀಕ್ಷೇತ್ರ ಇಟಗಿಯ ತೇರಿನ ಆಮಂತ್ರಣ Read More »
ಬಿಳಸೀಮಾ ಒಡೆಯ ಶ್ರೀ ರಾಮೇಶ್ವರ ಮತ್ತು ಶ್ರೀ ಅಮ್ಮನವರು ಹಾಗೂ ಶ್ರೀ ವಿಠ್ಠಲ ದೇವಸ್ಥಾನ ಶ್ರೀಕ್ಷೇತ್ರ ಇಟಗಿಯಲ್ಲಿ ಪ್ರತಿ ವರುಷದಂತೆ ನೆರವೇರುವ ಶ್ರೀ ರಾಮೇಶ್ವರನ ರಥೋತ್ಸವದ ರಾಯಸ ಆಮಂತ್ರಣ.
ಶ್ರೀಕ್ಷೇತ್ರದ ತೇರಿನ ರಾಯಸ ಆಮಂತ್ರಣ Read More »
ಬಿಳಗಿ ಸೀಮಾ ಮಹತೋಬಾರ ಶ್ರೀ ರಾಮೇಶ್ವರ ಶ್ರೀ ಅಮ್ಮನವರು ಹಾಗೂ ಶ್ರೀ ವಿಠ್ಠಲ ದೇವಸ್ಥಾನ ಶ್ರೀಕ್ಷೇತ್ರ ಇಟಗಿಯಲ್ಲಿ ಮಾರ್ಗಶಿರ ಅಮವಾಸ್ಯೆ (19-12-2025 ಶುಕ್ರವಾರ) ದೇವಸ್ಥಾನದ ತ್ರಿದೇವತಾ ಭಜಕರ ಮತ್ತು ಸೀಮಾ ಹಾಗೂ ಸಮಸ್ತ ಭಕ್ತರ ಶ್ರೇಯೋಭಿವೃದ್ಧಿಯನ್ನು ನೆನದು ಪ್ರತಿ ಅಮವಾಸ್ಯೆಯಂದು ನೆಡೆಯಲ್ಪಡುವ ಸಂಕಲ್ಪ ಸಿದ್ಧಿ ರಥೋತ್ಸವ ಮತ್ತು ಮಹಾಬಲಿ ಪ್ರದಾನ, ಆದಿವಾಸ ಹೋಮ, ಶತರುದ್ರ ಹವನ,ಕಲಾಭಿಷೇಕಗಳಾದಿಗಳಿಂದ ದೇವರಲ್ಲಿ ನೆರವೇರಿಸಲಾಯಿತು. ಹಲವಾರು ಭಕ್ತರ ಸಮ್ಮುಖದಲ್ಲಿ ಶಾಸ್ತ್ರೀಕ್ತವಾಗಿ ನೆರವೇರಿತು, ನಂತರ ಭಕ್ತಾದಿಗಳು ಪರ್ಯಾಪ್ತಿ ಅನ್ನ ಪ್ರಸಾದ ಭೋಜನವನ್ನು ಸ್ವೀಕರಿಸಿ ಕೃತಾರ್ಥರಾದರು.
ಶ್ರೀ ಕ್ಷೇತ್ರ ಇಟಗಿಯಲ್ಲಿ ಈಗಾಗಲೇ ಶರನ್ನವರಾತ್ರಿ ಉತ್ಸವ ಪ್ರಾರಂಭವಾಗಿದ್ದು, ವಿಜೃಂಭಣೆಯಿಂದ ನಡೆಯುತ್ತಿದೆ. ಈ ವರ್ಷ ʼನವದೇವಿ ನವಾರಾಧನೆʼ ಹೆಸರಲ್ಲಿ ನಡೆಯುತ್ತಿರುವ ನವರಾತ್ರಿ ಉತ್ಸವದ ಅಷ್ಟಮಿಯ ದಿನ ದಿನಾಂಕ:30-09-2025 ಮಂಗಳವಾರದಂದು ʼಪ್ರಸನ್ನ ದುರ್ಗಾದೀಪ ನಮಸ್ಕಾರʼ ಪೂಜೆಯು ನಡೆಯಲಿದ್ದು ಜ್ಯೋತಿ ಸ್ವರೂಪದಲ್ಲಿ ಮಹಾ ತಾಯಿಯನ್ನು ಆರಾಧಿಸುವ ಸುಸಂದರ್ಭ ಇದಾಗಿದೆ. ಈ ಪುಣ್ಯತಮ ಕಾರ್ಯಕ್ರಮದಲ್ಲಿ ಎಲ್ಲಾ ಭಜಕರು ಭಾಗಿಯಾಗಬೇಕೆಂದು ಮೊಕ್ತೇಸರ ಮಂಡಳಿ ವಿನಂತಿಸಿಕೊಂಡಿದೆ.
ಇಟಗಿಯಲ್ಲಿ ʼದುರ್ಗಾದೀಪನಮಸ್ಕಾರʼ Read More »
|| ಶ್ರೀ ರಾಮೇಶ್ವರ ಪ್ರಸನ್ನ: || ಬಿಳಗಿ ಸೀಮಾ ಮ್ಹ|| ಶ್ರೀ ರಾಮೇಶ್ವರ ಮತ್ತು ಶ್ರೀ ಅಮ್ಮನವರು ಹಾಗೂ ಶ್ರೀ ವಿಠ್ಠಲ ದೇವಸ್ಥಾನ ಶ್ರೀಕ್ಷೇತ್ರ ಇಟಗಿ ತಾ॥ ಸಿದ್ದಾಪುರ (ಉ. ಕ.) ಶ್ರೀ ವಿಶ್ವಾವಸು ನಾಮ ಸಂ|ದ ಆಶ್ವಯುಜ ಶುಕ್ಲ ಪ್ರತಿಪದೆ ದಿನಾಂಕ 22-09-2025 ಸೋಮವಾರದಂದು ಪ್ರತಿ ವರ್ಷದಂತೆ “ಶರನ್ನವರಾತ್ರಿ ಉತ್ಸವ ‘ವು ಶ್ರೀ ಅಮ್ಮನವರ ಸನ್ನಿಧಿಯಲ್ಲಿ ಪ್ರಾರಂಭವಾಗಲಿದ್ದು ದಿನಾಂಕ 02-10-2025 ಗುರುವಾರ ವಿಜಯದಶಮೀ ಪರ್ಯಂತ ಶ್ರದ್ಧಾಭಕ್ತಿಪೂರ್ವಕ ವಿಜೃಂಭಣೆಯಿಂದ ನಡೆಯಲಿದೆ. * ಶರತ್ಕಾಲೇ ಮಹಾಪೂಜಾ ಕ್ರೀಯತೆ
ಶ್ರೀಕ್ಷೇತ್ರ ಇಟಗಿಯಲ್ಲಿ “ಶರನ್ನವರಾತ್ರಿ ಉತ್ಸವ” Read More »