Uncategorized

ಇಟಗಿಯಲ್ಲಿ ರಥೋತ್ಸವ ಪ್ರಾರಂಭ

ವಿಶ್ವಾವಸು ಸಂವತ್ಸರದ ವಾರ್ಷಿಕ ಮಹಾರಥೋತ್ಸವದ ಧಾರ್ಮಿಕ‌ ಕಾರ್ಯಕ್ರಮಗಳು ಪ್ರಾರಂಭವಾಗಿದ್ದು, ಈ ದಿನ ಫೆಬ್ರವರಿ 20 ಶುಕ್ರವಾರ, ಪ್ರಾರ್ಥನೆ, ಗಣಪತಿ ಪೂಜೆ, ಸಂಕಲ್ಪ, ಕೌತುಕ ಬಂಧನ, ಗಣಹವನ, ಧ್ವಜಾರೋಹಣ ಮತ್ತು ಇನ್ನಿತರ ಕಾರ್ಯಕ್ರಮಗಳು ನಡೆದವು.

ಇಟಗಿಯಲ್ಲಿ ರಥೋತ್ಸವ ಪ್ರಾರಂಭ Read More »

ಇಟಗಿಯಲ್ಲಿ ʼದುರ್ಗಾದೀಪನಮಸ್ಕಾರʼ

ಶ್ರೀ ಕ್ಷೇತ್ರ ಇಟಗಿಯಲ್ಲಿ ಈಗಾಗಲೇ ಶರನ್ನವರಾತ್ರಿ ಉತ್ಸವ ಪ್ರಾರಂಭವಾಗಿದ್ದು, ವಿಜೃಂಭಣೆಯಿಂದ ನಡೆಯುತ್ತಿದೆ. ಈ ವರ್ಷ ʼನವದೇವಿ ನವಾರಾಧನೆʼ ಹೆಸರಲ್ಲಿ ನಡೆಯುತ್ತಿರುವ ನವರಾತ್ರಿ ಉತ್ಸವದ ಅಷ್ಟಮಿಯ ದಿನ ದಿನಾಂಕ:30-09-2025 ಮಂಗಳವಾರದಂದು ʼಪ್ರಸನ್ನ ದುರ್ಗಾದೀಪ ನಮಸ್ಕಾರʼ ಪೂಜೆಯು ನಡೆಯಲಿದ್ದು ಜ್ಯೋತಿ ಸ್ವರೂಪದಲ್ಲಿ ಮಹಾ ತಾಯಿಯನ್ನು ಆರಾಧಿಸುವ ಸುಸಂದರ್ಭ ಇದಾಗಿದೆ. ಈ ಪುಣ್ಯತಮ ಕಾರ್ಯಕ್ರಮದಲ್ಲಿ ಎಲ್ಲಾ ಭಜಕರು ಭಾಗಿಯಾಗಬೇಕೆಂದು ಮೊಕ್ತೇಸರ ಮಂಡಳಿ ವಿನಂತಿಸಿಕೊಂಡಿದೆ.

ಇಟಗಿಯಲ್ಲಿ ʼದುರ್ಗಾದೀಪನಮಸ್ಕಾರʼ Read More »

ಇಟಗಿ ಶ್ರೀಕ್ಷೇತ್ರ ಅಷ್ಟಬಂಧ ಮಹೋತ್ಸವ ಸ್ಮರಣ ಸಂಚಿಕೆ “ರಾಮೇಶ್ವರ” ಅನಾವರಣ.

ರಾಮೇಶ್ವರ ಸ್ಮರಣ ಸಂಚಿಕೆಯನ್ನು ವಾಸುದೇವ ರಂಗಾ ಭಟ್ಟ ಅನಾವರಣ ಮಾಡಿದರು.ಸಿದ್ದಾಪುರ; ನಾವು ಆರಾಧಿಸಿಕೊಂಡು ಬರುತ್ತಿರುವ ದೇವರ ಅಷ್ಟಬಂಧದAತಹ ಕಾರ್ಯಕ್ರಮಗಳಿಂದ ಭಕ್ತರಲ್ಲಿಯ ಶ್ರದ್ಧಾ ವಿಶ್ವಾಸ ಮತ್ತಷ್ಟು ಹೆಚ್ಚುತ್ತದೆ. ದೇವರಿಗೆ ನಿಗದಿತ ಅವಧಿಯಲ್ಲಿ ಅಷ್ಟಬಂಧವನ್ನು ನೆರವೇರಿಸುವುದು ನಮ್ಮ ಆಚರಣೆ-ಸಂಪ್ರದಾಯ ಎಂದು ಖ್ಯಾತ ಯಕ್ಷಗಾನ ತಾಳಮದ್ದಲೆ ಅರ್ಥಧಾರಿ ವಾಸುದೇವ ರಂಗಾ ಭಟ್ಟ ಮಧೂರು ಹೇಳಿದ್ದಾರೆ. ಅವರು ತಾಲೂಕಿನ ಬಿಳಗಿ ಸೀಮೆಯ ಇಟಗಿ ಶ್ರೀಕ್ಷೇತ್ರದ “ಅಷ್ಟಬಂಧ ಮಹೋತ್ಸವ-೨೦೨೫”ರ ಸ್ಮರಣ ಸಂಚಿಕೆ “ರಾಮೇಶ್ವರ” ವನ್ನು ಶನಿವಾರ ಅನಾವರಣ ಮಾಡಿ ಮಾತನಾಡುತ್ತಿದ್ದರು. ಶ್ರೀರಾಮ ಹಾಗೂ ಈಶ್ವರ

ಇಟಗಿ ಶ್ರೀಕ್ಷೇತ್ರ ಅಷ್ಟಬಂಧ ಮಹೋತ್ಸವ ಸ್ಮರಣ ಸಂಚಿಕೆ “ರಾಮೇಶ್ವರ” ಅನಾವರಣ. Read More »

ಅಷ್ಟಬಂಧ ಮಹೋತ್ಸವದ “ಸ್ಮರಣ ಸಂಚಿಕೆ ಅನಾವರಣ” ಕಾರ್ಯಕ್ರಮ.

ಬಿಳಗಿ ಸೀಮಾ ಒಡೆಯ ಶ್ರೀರಾಮೇಶ್ವರನ ಅಷ್ಟಬಂಧ ಮಹೋತ್ಸವದ “ಸ್ಮರಣ ಸಂಚಿಕೆ ಅನಾವರಣ” ಕಾರ್ಯಕ್ರಮವನ್ನು ದಿನಾಂಕ 23-08-2025 ಶನಿವಾರ ಸಮಯ ಮಧ್ಯಾಹ್ನ 2 ಘಂಟೆಗೆ ಹಮ್ಮಿಕ್ಕೊಂಡಿದ್ದು, ಸರ್ವರಿಗೂ ಸ್ವಾಗತ ಕೋರುವವರು ಸ್ಮರಣ ಸಂಚಿಕೆ ಸಂಪಾದಕ ಮಂಡಳಿ ಮತ್ತು ಮೊಕ್ತೇಸರ ಮಂಡಳಿ ಶ್ರಿಕ್ಷೇತ್ರ ಇಟಗಿ.

ಅಷ್ಟಬಂಧ ಮಹೋತ್ಸವದ “ಸ್ಮರಣ ಸಂಚಿಕೆ ಅನಾವರಣ” ಕಾರ್ಯಕ್ರಮ. Read More »

ಶ್ರೀ ಕ್ಷೇತ್ರ ಇಟಗಿಯ ʼಅಧಿಕೃತ ಅಂಚೆ ಲಕೋಟೆʼ ಬಿಡುಗಡೆ

ಪುರಾಣ ಪ್ರಸಿದ್ಧ ಕ್ಷೇತ್ರವಾದ ಇಟಗಿ ರಾಮೇಶ್ವರ ದೇವಸ್ಥಾನದ ಅಧೀಕೃತ ಅಂಚೆ ಲಕೋಟೆ ಬಿಡುಗಡೆ ಸಮಾರಂಭ ದಿನಾಂಕ:25/02/2025 ಮಹಾಶಿವರಾತ್ರಿಯಂದು ನಡೆಯಿತು. ಮಹಾ ಶಿವರಾತ್ರಿ ನಿಮಿತ್ತ ಶಿರಸಿ ಅಂಚೆ ವಿಭಾಗವು ಶ್ರೀ ರಾಮೇಶ್ವರ ದೇವಸ್ಥಾನ ಇಟಗಿಯ ಸಹಯೋಗದೊಂದಿಗೆ, ಶ್ರೀ ರಾಮೇಶ್ವರ ದೇವಸ್ಥಾನ ಇಟಗಿಯ ಚಿತ್ರವಿರುವ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆಗೊಳಿಸಿದೆ. ಶಿವರಾತ್ರಿಯ ಶುಭ ದಿನದಂದು ಸಾಯಂಕಾಲ 3ಕ್ಕೆ ಇಟಗಿ ಶಾಖಾ ಅಂಚೆ ಕಚೇರಿಯ ಆವರಣದಲ್ಲಿ ಈ ವಿಶೇಷ ಅಂಚೆ ಲಕೋಟೆ ಲೋಕಾರ್ಪಣೆಗೊಂಡಿದೆ.

ಶ್ರೀ ಕ್ಷೇತ್ರ ಇಟಗಿಯ ʼಅಧಿಕೃತ ಅಂಚೆ ಲಕೋಟೆʼ ಬಿಡುಗಡೆ Read More »

ಶ್ರೀ ಕ್ಷೇತ್ರದಲ್ಲಿ ನಡೆದ ತುಲಾಭಾರ, ಶತರುದ್ರ ಹೋಮ ಸೇವೆ

ದಿನಾಂಕ:13/12/2024 ಶುಕ್ರವಾರ,ರಾಘವೆಂದ್ರ ಶರ್ಮ ತಾಳಗುಪ್ಪ ಇವರು ತಮ್ಮ ಸಕುಟುಂಬ ಸಮೇತರಾಗಿ ಶ್ರೀ ಕ್ಷೇತ್ರ ಇಟಗಿಗೆ ಆಗಮಿಸಿ ,ತಾವು ಈ ಹಿಂದೆಯೇ ಶ್ರೀ ರಾಮೇಶ್ವರನ ಸನ್ನಿಧಿಯಲ್ಲಿಯೇ ಮಾಡಿಸಸುತ್ತೇವೆ ಎಂಬುದಾಗಿ ಸಂಕಲ್ಪ ಮಾಡಿದ ತಮ್ಮ ಕುಟುಂಬದ ಸರ್ವಾಂಗೀಣ ಅಭಿವೃದ್ಧಿಗೋಸ್ಕರವಾಗಿಶ್ರೀ ದೇವರಿಗೆ ತುಲಾಭಾರ ಸೇವೆ ಮತ್ತು ಶತರುದ್ರ ಹವನವನದ ಸೇವೆಯನ್ನು ಮಾಡಿ ಶ್ರೀ ದೇವರ ಸಂಪೂರ್ಣ ರಕ್ಷೆಯನ್ನು ಪಡೆದರು

ಶ್ರೀ ಕ್ಷೇತ್ರದಲ್ಲಿ ನಡೆದ ತುಲಾಭಾರ, ಶತರುದ್ರ ಹೋಮ ಸೇವೆ Read More »

Scroll to Top