ಇಷ್ಟಿಕಾಪುರಾಧೀಶ್ವರನ ಕ್ಷೇತ್ರದಲ್ಲಿ ಶ್ರಾವಣದ ಸಂಭ್ರಮ

 

ಇಟಗಿ | ಆಗಸ್ಟ್ 17, 2026

ಪವಿತ್ರ ಶ್ರಾವಣ ಮಾಸದ ಮೊದಲ ಸೋಮವಾರದ ಅಂಗವಾಗಿ ಐತಿಹಾಸಿಕ ಶ್ರೀಕ್ಷೇತ್ರ ಇಟಗಿಯ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಭಕ್ತಿಭಾವ ಹಾಗೂ ಸಡಗರದಿಂದ ನೆರವೇರಿದವು.

ಶ್ರಾವಣ ಮಾಸದ ಮೊದಲ ಸೋಮವಾರದ ಪ್ರಯುಕ್ತ ಮುಂಜಾನೆಯಿಂದಲೇ ದೇವಸ್ಥಾನದಲ್ಲಿ ಧಾರ್ಮಿಕ ವಾತಾವರಣ ನಿರ್ಮಾಣಗೊಂಡಿತ್ತು. ಶ್ರೀ ರಾಮೇಶ್ವರ ದೇವರಿಗೆ ವಿಶೇಷ ಅಭಿಷೇಕ, ಅಲಂಕಾರ, ಅರ್ಚನೆ ಹಾಗೂ ವಿವಿಧ ಪೂಜಾ ವಿಧಿವಿಧಾನಗಳನ್ನು ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು. ನಂತರ ಮಹಾಮಂಗಳಾರತಿಯನ್ನು ನೆರವೇರಿಸಿ ಭಕ್ತರಿಗೆ ತೀರ್ಥ-ಪ್ರಸಾದ ವಿತರಿಸಲಾಯಿತು.

ಶಿವಭಕ್ತಿಯಿಂದ ಕಂಗೊಳಿಸಿದ ಶ್ರೀಕ್ಷೇತ್ರ

ಶ್ರಾವಣ ಮಾಸವು ಶಿವಾರಾಧನೆಗೆ ಅತ್ಯಂತ ಪವಿತ್ರವಾದ ಮಾಸವಾಗಿದ್ದು, ಶ್ರಾವಣ ಸೋಮವಾರಗಳಿಗೆ ವಿಶೇಷ ಧಾರ್ಮಿಕ ಮಹತ್ವವಿದೆ. ಈ ಹಿನ್ನೆಲೆಯಲ್ಲಿ ಮೊದಲ ಸೋಮವಾರದಂದು ಶ್ರೀ ರಾಮೇಶ್ವರ ದೇವರ ದರ್ಶನ ಪಡೆಯಲು ಭಕ್ತರು ಕುಟುಂಬ ಸಮೇತರಾಗಿ ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರ್.

ಶ್ರೀದೇವರ ಸರ್ವಾಲಂಕಾರ ಮತ್ತು ಧಾರ್ಮಿಕ ವಾತಾವರಣವು ಭಕ್ತರ ಮನಸೆಳೆಯಿತು. ಶಿವನಾಮಸ್ಮರಣೆ, ಪೂಜಾ ಕೈಂಕರ್ಯಗಳು ಹಾಗೂ ಮಂಗಳಾರತಿಯೊಂದಿಗೆ ಶ್ರೀಕ್ಷೇತ್ರವು ಭಕ್ತಿಮಯವಾಗಿ ಕಂಗೊಳಿಸಿತು. ಶ್ರಾವಣ ಸೋಮವಾರದೊಂದಿಗೆ ಇಂದೇ ನಾಗರ ಪಂಚಮೀ ಆಗಿರುವುದರಿಂದ ಧಾರ್ಮಿಕ ಆಚರಣೆಗೆ ಉತ್ತಮ ದಿನವಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಶ್ರೀ ರಾಮೇಶ್ವರನ ಕೃಪೆಗೆ ಪಾತ್ರರಾದರು.

ಮುಂದುವರಿಯಲಿರುವ ಶ್ರಾವಣ ಮಾಸದ ಪೂಜಾ ಕೈಂಕರ್ಯಗಳು

ಶ್ರಾವಣ ಮಾಸದ ಮುಂದಿನ ಸೋಮವಾರಗಳಲ್ಲಿಯೂ ಶ್ರೀ ರಾಮೇಶ್ವರ ಸನ್ನಿಧಿಯಲ್ಲಿ ವಿಶೇಷ ಪೂಜೆಗಳು ನೆರವೇರಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಶ್ರೀಕ್ಷೇತ್ರಕ್ಕೆ ಆಗಮಿಸಿ ದೇವರ ದರ್ಶನ ಪಡೆದು ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ದೇವಸ್ಥಾನದ ಆಡಳಿತ ಮಂಡಳಿ ವಿನಂತಿಸಿದೆ.

ಶ್ರಾವಣ ಮಾಸದ ಈ ಪವಿತ್ರ ಸಂದರ್ಭದಲ್ಲಿ ಶ್ರೀ ರಾಮೇಶ್ವರನ ದಿವ್ಯ ಸನ್ನಿಧಿಯಲ್ಲಿ ಭಕ್ತಿ, ಶ್ರದ್ಧೆ ಮತ್ತು ಧಾರ್ಮಿಕ ಪರಂಪರೆಯ ಸೊಬಗು ಮತ್ತಷ್ಟು ಮೆರೆಯಿತು.

ಓಂ ನಮಃ ಶಿವಾಯ 🙏
ಹರ ಹರ ಮಹಾದೇವ 🔱

 

 

 

Leave a Comment

Your email address will not be published. Required fields are marked *

Scroll to Top