ಶ್ರೀ ಕ್ಷೇತ್ರ ಇಟಗಿಯಲ್ಲಿ ನಡೆದ ಮಹಾಶಿವರಾತ್ರಿ ಉತ್ಸವ

ಬಿಳಗಿ ಸೀಮಾಧ್ಯಕ್ಷನಾಗಿರುವ ಶ್ರೀ ರಾಮೇಶ್ವರನ ಪುಣ್ಯ ಕ್ಷೇತ್ರವಾದ ಇಟಗಿಯಲ್ಲಿ ಮಹಾಶಿವರಾತ್ರಿ ಉತ್ಸವವು ವಿಜೃಂಭಣೆಯಿಂದ ನಡೆಯಿತು. ಬೆಳಿಗ್ಗಿನಿಂದಲೇ, ಶೃದ್ಧಾ ಭಕ್ತಿ ಪೂರ್ವಕ ಪೂಜಾ ವಿನಿಯೋಗಗಳು ಜರುಗಿದವು. ಸಾಮೂಹಿಕ ಶತರುದ್ರ ಪಾರಾಯಣ,ಪಂಚಾಮೃತ ಅಭಿಷೇಕ, ಭಸ್ಮಾರ್ಚನೆ, ಬಿಲ್ವಾರ್ಚನೆ,ತಿಲಾರ್ಚನೆ ಮಹಾ ಅಭಿಷೇಕ, ಮಹಾಮಂಗಳಾರತಿ,ಸಂಜೆ ಪಲ್ಲಕ್ಕಿ ಉತ್ಸವ ಕಾರ್ಯಕ್ರಮಗಳು ಯಶಸ್ವಿಯಾಗಿ ಸಂಪನ್ನಗೊಂಡಿತು.,, ಎಲ್ಲ ಭಕ್ತರೂ,,ಮಹಾಶಿವರಾತ್ರಿಯ ಈ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ,ಸೇವಾ ಭಾಜನರಾಗಿ,ಶ್ರೀ ರಾಮೇಶ್ವರನ ಮುಡಿಗಂಧ ಪ್ರಸಾದವನ್ನು ಸ್ವೀಕರಿಸಿ ಪುನೀತರಾದರು.

ಶ್ರೀ ಕ್ಷೇತ್ರ ಇಟಗಿಯಲ್ಲಿ ನಡೆದ ಮಹಾಶಿವರಾತ್ರಿ ಉತ್ಸವ Read More »

ಶ್ರೀ ಕ್ಷೇತ್ರ ಇಟಗಿಯ ʼಅಧಿಕೃತ ಅಂಚೆ ಲಕೋಟೆʼ ಬಿಡುಗಡೆ

ಪುರಾಣ ಪ್ರಸಿದ್ಧ ಕ್ಷೇತ್ರವಾದ ಇಟಗಿ ರಾಮೇಶ್ವರ ದೇವಸ್ಥಾನದ ಅಧೀಕೃತ ಅಂಚೆ ಲಕೋಟೆ ಬಿಡುಗಡೆ ಸಮಾರಂಭ ದಿನಾಂಕ:25/02/2025 ಮಹಾಶಿವರಾತ್ರಿಯಂದು ನಡೆಯಿತು. ಮಹಾ ಶಿವರಾತ್ರಿ ನಿಮಿತ್ತ ಶಿರಸಿ ಅಂಚೆ ವಿಭಾಗವು ಶ್ರೀ ರಾಮೇಶ್ವರ ದೇವಸ್ಥಾನ ಇಟಗಿಯ ಸಹಯೋಗದೊಂದಿಗೆ, ಶ್ರೀ ರಾಮೇಶ್ವರ ದೇವಸ್ಥಾನ ಇಟಗಿಯ ಚಿತ್ರವಿರುವ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆಗೊಳಿಸಿದೆ. ಶಿವರಾತ್ರಿಯ ಶುಭ ದಿನದಂದು ಸಾಯಂಕಾಲ 3ಕ್ಕೆ ಇಟಗಿ ಶಾಖಾ ಅಂಚೆ ಕಚೇರಿಯ ಆವರಣದಲ್ಲಿ ಈ ವಿಶೇಷ ಅಂಚೆ ಲಕೋಟೆ ಲೋಕಾರ್ಪಣೆಗೊಂಡಿದೆ.

ಶ್ರೀ ಕ್ಷೇತ್ರ ಇಟಗಿಯ ʼಅಧಿಕೃತ ಅಂಚೆ ಲಕೋಟೆʼ ಬಿಡುಗಡೆ Read More »

ಶ್ರೀ ಕ್ಷೇತ್ರ ಇಟಗಿಗೆ ಆಗಮಿಸಿದ ಶ್ರೀ ರಾಮಾವದೂತರು

ಹಾಸನದ ಶ್ರೀ ಶ್ರೀ ರಾಮಾವದೂತರು ಶ್ರೀ ಕ್ಷೇತ್ರ ಇಟಗಿಗೆ ಆಗಮಿಸಿ ಅನುಗ್ರಹಿಸಿದರು. ಇಟಗಿಯ ಭಕ್ತರು ಶ್ರೀಗಳಿಗೆ ಪಾದಪೂಜೆ ಮತ್ತು ಭಿಕ್ಷಾ ಸೇವೆಯನ್ನು ನೇರವೇರಿಸಿದರು.ನಂತರದಲ್ಲಿ ಆಶೀರ್ವಚನ ನೀಡಿದ ಶ್ರೀಗಳವರು ʼಪ್ರಸಿದ್ಧ ಇಟಗಿ ಕ್ಷೇತ್ರದ ವಾಸ್ತು ಶಿಲ್ಪ ವಿನ್ಯಾಸವನ್ನು ಹೊಗಳಿದರು.ರಾಮೇಶ್ವರನಿಗೆ ಭಕ್ತಿಯಿಂದ ಮಾಡುವ ಎಲ್ಲಾ ಕೆಲಸಕ್ಕೂ ಖಂಡಿತ ಫಲ ಇದ್ದೇ ಇದೆ.ಎಲ್ಲವನ್ನೂ ಕೂಡಲೇ ಅಪೇಕ್ಷಿಸದೇ ಸೇವೆ ಮಾಡುತ್ತಾ ಕಾದರೇ ಖಂಡಿತ ಅವನ ಅನುಗ್ರಹ ಆಗೇ ಆಗುತ್ತದೆʼ ಎಂದರು.ಅವದೂತರ ದರ್ಶನಕ್ಕೆ ಕ್ಷೇತ್ರದ ಭಜಕರು ಆಗಮಿಸಿ ಶ್ರೀಗಳ ಆಶೀರ್ವಾದ ಪಡೆದು ಪ್ರಸಾದ ಭೋಜನ

ಶ್ರೀ ಕ್ಷೇತ್ರ ಇಟಗಿಗೆ ಆಗಮಿಸಿದ ಶ್ರೀ ರಾಮಾವದೂತರು Read More »

ಇತಗಿಯಲ್ಲಿ ಮಹಾಶಿವರಾತ್ರಿ ಉತ್ಸವ

ಶ್ರೀ ರಾಮೇಶ್ವರ ದೇವರ ಪ್ರೀಯ ಭಕ್ತರೇ,ದಿನಾಂಕ:26-2-2025 ಬುಧವಾರ ” “ಮಹಾಶಿವರಾತ್ರಿ”.ಪುರಾಣ ಪ್ರಸಿದ್ಧಿಯ ಆಗಮೋಕ್ತ ಪುಣ್ಯತಮ ಶ್ರೀ ಕ್ಷೇತ್ರ ಇಟಗಿ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ದಿನಾಂಕ 26/02/2025 ಬುದಹವಾರ ಬೆಳಿಗ್ಗಿನಿಂದಲೇ, ಶೃದ್ಧಾ ಭಕ್ತಿ ಪೂರ್ವಕ ಪೂಜಾ ವಿನಿಯೋಗಗಳು ಜರುಗಲಿವೆ. ಸಾಮೂಹಿಕ ಶತರುದ್ರ ಪಾರಾಯಣ,ಪಂಚಾಮೃತ ಅಭಿಷೇಕ, ಭಸ್ಮಾರ್ಚನೆ, ಬಿಲ್ವಾರ್ಚನೆ,ತಿಲಾರ್ಚನೆ ಮಹಾ ಅಭಿಷೇಕ, ಮಹಾಮಂಗಳಾರತಿ,ಸಂಜೆ ಪಲ್ಲಕ್ಕಿ ಉತ್ಸವ ಕಾರ್ಯಕ್ರಮಗಳು ಏರ್ಪಾಡಾಗಿದೆ,, ನಾವೆಲ್ಲಾ ಭಕ್ತರೂ,,ಮಹಾಶಿವರಾತ್ರಿಯ ಈ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ,ಸೇವಾ ಭಾಜನರಾಗಿ,ಶ್ರೀ ರಾಮೇಶ್ವರನ ಮುಡಿಗಂಧ ಪ್ರಸಾದವನ್ನು ಸ್ವೀಕರಿಸಿ ಪುನೀತರಾಗೋಣ.🔱🚩ಹರ ಹರ ಮಹಾದೇವ🚩🔱 ಸೂಚನೆ:

ಇತಗಿಯಲ್ಲಿ ಮಹಾಶಿವರಾತ್ರಿ ಉತ್ಸವ Read More »

ದಾವಣಗೆರೆಯಲ್ಲಿ ನಡೆದ ʼಇಟಗಿಯ ಇತಿವೃತ್ತʼ ಪುಸ್ತಕದ ಪರಿಚಯ ಕಾರ್ಯಕ್ರಮ

ಐತಿಹಾಸಿಕ ಮತ್ತು ಪುರಾಣ ಕ್ಷೇತ್ರವಾದ ಇಟಗಿಯ ಇತಿಹಾಸವನ್ನು ಮತ್ತು ಇಲ್ಲಿನ ವಾಸ್ತುಶಿಲ್ಪಗಳ ಕುರಿತಾದ ಮಾಹಿತಿಯನ್ನು ಒದಗಿಸುವ ‘ಇಟಗಿಯ ಇತಿವೃತ್ತ’ ಪುಸ್ತಕವನ್ನು ದಿನಾಂಕ: 07/02/2025 ಶುಕ್ರವಾರ , ರಾಷ್ಟ್ರೋತ್ಥಾನ ಶಾಲೆ ದಾವಣಗೆರೆಯಲ್ಲಿ ಪರಿಚಯಿಸಲಾಯಿತು. “ಲೇಖಕ ಅತ್ತಿಮುರುಡು ವಿಶ್ವೇಶ್ವರ ಅವರು ಬರೆದ ಶ್ರೀ ಕ್ಷೇತ್ರ ಇಟಗಿಯ ಇತಿಹಾಸ ಪುಸ್ತಕ ‘ಇಟಗಿಯ ಇತಿವೃತ್ತ’ ಪುಸ್ತಕವು ಐತಿಹಾಸಿಕ ಮತ್ತು ಪೌರಾಣಿಕ ಕುರುಹುವಿನ‌ ಜೊತೆಗೆ ಪ್ರಾಚೀನ ಕಾಲದ ವಾಸ್ತುಶಿಲ್ಪದ ಜ್ಞಾನವನ್ನು ನೀಡುತ್ತದೆ” ಎಂದು ಭೋದಕ ದತ್ತಾತ್ರೇಯ ಭಟ್ ಮಾತನಾಡಿದರು. “ಇಂದಿನ ಕಾಲದವರು ಪುರಾಣಗಳನ್ನು ಓದಿ

ದಾವಣಗೆರೆಯಲ್ಲಿ ನಡೆದ ʼಇಟಗಿಯ ಇತಿವೃತ್ತʼ ಪುಸ್ತಕದ ಪರಿಚಯ ಕಾರ್ಯಕ್ರಮ Read More »

ಅಷ್ಟಬಂಧ ಮಹೋತ್ಸವದ ಉಪಸೇವಾ ಸಮೀತಿ ಪ್ರಕಟಣೆ

ದಿನಾಂಕ 05/02/2025 ಬುಧವಾರ ಶ್ರೀ ಕ್ಷೇತ್ರ ಇಟಗಿಯಲ್ಲಿ ಅಷ್ಟಬಂಧ ಮಹೋತ್ಸವದ ಉಪ ಸಮೀತಿಗಳ ಸದಸ್ಯರ ಹೆಸರುಗಳನ್ನು ಪ್ರಕಟಗೊಳಿಸಲಾಯಿತು.ಅಷ್ಟಬಂಧ ಸಮೀತಿಯ ಅಧ್ಯಕ್ಷರಾಗಿರುವ ಶಶಿಭೂಷಣ ಹೆಗಡೆಯವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿಮಹತ್ಕಾರ್ಯವಾಗಿರುವ ದಿವ್ಯ ಅಷ್ಟಬಂಧ ಮಹೋತ್ಸವಕ್ಕೆ ಅವಶ್ಯವಿರುವ ಅನೇಕ ಉಪ ಸಮೀತಿಗಳ ಮುಖ್ಯಸ್ಥರು ಮತ್ತು ಸದಸ್ಯರುಗಳ ಹೆಸರುಗಳನ್ನು ಪ್ರಸ್ತಾಪಿಸಿ ಎಲ್ಲ ಸಮೀತಿ ಸದಸ್ಯರಿಗೂ ಆಮಂತ್ರಣ ಪತ್ರಿಕೆ ನೀಡಲಾಯಿತು.ಅಧ್ಯಕ್ಷೀಯ ನುಡಿಯನ್ನು ಆಡಿದ ಡಾ|| ಶಶಿಭೂಷಣ ಹೆಗಡೆ ದೊಡ್ಮನೆಯವರು, ‘ ಇದು ಕೇವಲ ನಮ್ಮ ಸೀಮೆಗಲ್ಲದೇ ತಾಲ್ಲೂಕು,ಜಿಲ್ಲೆಗೂ ಹೆಮ್ಮೆಯ ಕಾರ್ಯಕ್ರಮ.ಈ ಕಾರ್ಯವನ್ನು ಬಹಳ

ಅಷ್ಟಬಂಧ ಮಹೋತ್ಸವದ ಉಪಸೇವಾ ಸಮೀತಿ ಪ್ರಕಟಣೆ Read More »

ಶ್ರೀ ಕ್ಷೇತ್ರ ಇಟಗಿಯಲ್ಲಿ ಶತರುದ್ರ ಪಾರಾಯಣ

ಶ್ರೀ ಕ್ಷೇತ್ರ ಇಟಗಿಯಲ್ಲಿ ಅನಾದಿಕಾಲದಿಂದ ನಡೆಸಿಕೊಂಡು ಬರುತ್ತಿರುವ ತ್ರಿದೇವತಾ ಪೂಜೆಯ ಒಂದು ಭಾಗವಾದ, ಪ್ರತಿ ಅಮಾವಾಸ್ಯೆಯಂದು ನಡೆಯುವ ಶತರುದ್ರ ಪಾರಾಯಣ ಸೇವೆಯು ದಿನಾಂಕ:29/01/2025 ಬುಧವಾರ ಸಂಪನ್ನಗೊಂಡಿತು.ಅನೇಕ ವೈದಿಕರ ಸಮ್ಮುಖದಲ್ಲಿ ನಡೆಯುವ ಈ ಶತರುದ್ರ ಪಾರಾಯಣವನ್ನು, ಲೋಕಕಲ್ಯಾಣಾರ್ಥವಾಗಿ ಮಾಡುತ್ತ ಬಂದಿದ್ದು ಈ ದಿನ ಅನ್ನಸಂತರ್ಪಣೆ ನಡೆಯುವುದು ಶ್ರೀ ಕ್ಷೇತ್ರದ ವಿಶೇಷತೆಯನ್ನು ಎತ್ತಿ ಹಿಡಿಯುತ್ತದೆ

ಶ್ರೀ ಕ್ಷೇತ್ರ ಇಟಗಿಯಲ್ಲಿ ಶತರುದ್ರ ಪಾರಾಯಣ Read More »

Scroll to Top