ಇಟಗಿಯಲ್ಲಿ ಶ್ರಾವಣ ಕೊನೆಯ ಸೋಮವಾರ ಆಚರಣೆ

ಶ್ರೀಕ್ಷೇತ್ರ ಇಟಗಿಯಲ್ಲಿಈ ವರ್ಷದ ಶ್ರಾವಣಮಾಸದ ಕೊನೆಯ ಸೋಮವಾರದಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಪ್ರಸಾದ ಭೋಜನವು ಅತ್ಯಂತ ಯಶಸ್ವಿಯಾಗಿ ನಡೆಯಿತು. ದಿನಾಂಕ: 18/08/2025 ಸೋಮವಾರದಂದು,ಶತರುದ್ರ ಪಾರಾಯಣ ಮತ್ತು ಹವನವು ದೇವಸ್ಥಾನದ ಅರ್ಚಕರು ಮತ್ತು ವೈದಿಕರ ಸಹಯೋಗದಲ್ಲಿ ನೆರವೇರಿತು.ಹಲವಾರು ಭಕ್ತರು ದೇವರ ದರ್ಶನ ಮಾಡಿ ತಮ್ಮ ವಯಕ್ತಿಕ ಸೇವೆಗಳನ್ನು ಮಾಡಿಸಿ ಪ್ರಸಾದ ಭೋಜನ ಸ್ವೀಕರಿಸಿ ಕೃತಾರ್ಥರಾದರು.ಈ ಸಂದರ್ಭದಲ್ಲಿ 800ಕ್ಕೂ ಅಧಿಕ ಭಕ್ತರು ‘ಪರ್ಯಾಪ್ತಿ’ ಪ್ರಸಾದ ಭೋಜನ ಸ್ವೀಕರಿಸಿದರು. ಶ್ರಾವಣ ಕೊನೆಯ ಸೋಮವಾರದ ಪ್ರಸಾದ ಭೋಜನದ ಸೇವಾಕರ್ತರು:

ಇಟಗಿಯಲ್ಲಿ ಶ್ರಾವಣ ಕೊನೆಯ ಸೋಮವಾರ ಆಚರಣೆ Read More »

ಶ್ರೀಕ್ಷೇತ್ರ ಇಟಗಿಯಲ್ಲಿ ‘ಶ್ರಾವಣ ಸಂಭ್ರಮ

ಶ್ರಾವಣ ಮಾಸದ ಶುಭ ಕಾಲದಲ್ಲಿ ಜಗದೀಶ್ವರನ ಸೇವೆಯನ್ನು ಮಾಡಿದರೆ ಫಲ ಪ್ರಾಪ್ತಿಯಗುವುದೆಂಬ ಆಶಯದಿಂದ ಇಟಗಿಯ ಶ್ರೀ ರಾಮೇಶ್ವರನ ಸನ್ನಿಧಿಯಲ್ಲಿ ಶ್ರಾವಣ ಸೋಮವಾರದಂದು ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು. ಸಿದ್ದಾಪುರ ತಾಲ್ಲೂಕಿನ ಶ್ರೀಕ್ಷೇತ್ರ ಇಟಗಿಯ ಶ್ರೀರಾಮೇಶ್ವರ ದೇವರ ಸನ್ನಿಧಿಯಲ್ಲಿ ಶ್ರಾವಣ ಮಾಸದ ನಾಲ್ಕು ಸೋಮವಾರಗಳಂದು ಮತ್ತು ಅಮಾವಾಸ್ಯೆಯಂದು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು,ಮೊದಲ ಸೋಮವಾರ ಜುಲೈ 28 ರಂದು ಶತರುದ್ರ ಪಾರಾಯಣ, ರುದ್ರ ಹೋಮ, ರುದ್ರಾಭಿಷೇಕ, ಮತ್ತು ಮಹಾಪೂಜೆ ನೆರವೇರಿತು. ಸೀಮೆಯ ಹಲವಾರು ಭಕ್ತರು ಈ ದಿನ ಪಾಲ್ಗೊಂಡು ಸೇವೆಯನ್ನು

ಶ್ರೀಕ್ಷೇತ್ರ ಇಟಗಿಯಲ್ಲಿ ‘ಶ್ರಾವಣ ಸಂಭ್ರಮ Read More »

ಶ್ರೀಕ್ಷೇತ್ರ ಇಟಗಿಯಲ್ಲಿ ‘ಶಿವ ಶ್ರಾವಣ-ಶುಭ ಶ್ರಾವಣ’

ಸಿದ್ದಾಪುರ ತಾಲ್ಲೂಕಿನ ಶ್ರೀಕ್ಷೇತ್ರ ಇಟಗಿಯ ಶ್ರೀ ರಾಮೇಶ್ವರನ ಸನ್ನಿಧಿಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಶ್ರಾವಣ ಮಾಸದ ಆಚರಣೆಯನ್ನು ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುವುದು ಎಂದು ಆಡಳಿತ ಮಂಡಳಿ ತಿಳಿಸಿದೆ. ಈಶ್ವರನಿಗೆ ಶ್ರೇಷ್ಠವಾದ ಶ್ರಾವಣ ಮಾಸದಲ್ಲಿ ರುದ್ರಾಭಿಷೇಕ, ಜಪ, ವೃತಗಳು ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಅದೇ ರೀತಿಯಾಗಿ ಪುರಾಣ ಪ್ರಸಿದ್ಧ ಕ್ಷೇತ್ರ ಇಟಗಿಯಲ್ಲಿಪ್ರತಿ ಸೋಮವಾರ ಮತ್ತು ಅಮಾವಾಸ್ಯೆಯಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ವಿಶ್ವಾವಸು ಸಂವತ್ಸರದ ಶ್ರಾವಣ ಮಾಸದಲ್ಲಿ ನಾಲ್ಕು ಸೋಮವಾರಗಳಿದ್ದು,28/07/2025 ಸೋಮವಾರ04/08/2025 ಸೋಮವಾರ11/08/2025 ಸೋಮವಾರ18/08/2025 ಸೋಮವಾರ

ಶ್ರೀಕ್ಷೇತ್ರ ಇಟಗಿಯಲ್ಲಿ ‘ಶಿವ ಶ್ರಾವಣ-ಶುಭ ಶ್ರಾವಣ’ Read More »

ಶ್ರೀಕ್ಷೇತ್ರ ಇಟಗಿಯಲ್ಲಿ ಶ್ರಾವಣದ ಸಂಭ್ರಮ

ಬಿಳಗಿ ಸೀಮಾ ಒಡೆಯ ಇಷ್ಟಿಕಾಧೀಶ್ವರ ಶ್ರೀ ರಾಮೇಶ್ವರ ಮತ್ತು ಶ್ರೀ ಅಮ್ಮನವರು ಹಾಗೂ ಶ್ರೀ ವಿಠ್ಠಲ ದೇವಸ್ಥಾನ ಶ್ರೀಕ್ಷೇತ್ರ ಇಟಗಿಯಲ್ಲಿ ವಿಶ್ವಾವಸುನಾಮ ಸಂವತ್ಸರದ ಶ್ರಾವಣ ಮಾಸವು ಪಾಡ್ಯ ಶುಕ್ರವಾರ ದಿನಾಂಕ 02-07-2025 ರಂದು ಆರಂಭವಾಗುವುದು. ಶ್ರೀದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದ್ದು ಮತ್ತು ಪ್ರತಿ ಶ್ರಾವಣ ಸೋಮವಾರ ಶತರುದ್ರ ಪಾರಾಯಣ ಮತ್ತು ಹವನ ಹಾಗೂ ಇನ್ನಿತರ ‌ಧಾರ್ಮಿಕ ಕಾರ್ಯಗಳನ್ನು ಹಮ್ಮಿಕ್ಕೊಳ್ಳಲಾಗಿದ್ದು ಭಕ್ತರೆಲ್ಲರೂ ಸಹಕರಿಸ ಬೇಕಾಗಿ ವಿನಂತಿ.ರುದ್ರ ಪಾರಾಯಣದ ಸೇವಾ ಪಾವತಿ ರೂ

ಶ್ರೀಕ್ಷೇತ್ರ ಇಟಗಿಯಲ್ಲಿ ಶ್ರಾವಣದ ಸಂಭ್ರಮ Read More »

ಶ್ರೀಕ್ಷೇತ್ರದಲ್ಲಿ ತಾಳಮದ್ದಲೆ.

ಹೆಸರಾಂತ ಭಾಗವತರು ರಾಘವೇಂದ್ರ ಆಚಾರಿ ಜನ್ಸಾಲೆ ಅವರ ರಾಗದಲ್ಲಿ “ಭೀಷ್ಮಾರ್ಜುನ” ಯಕ್ಷಗಾನ ತಾಳಮದ್ದಲೆ ನೆರವೇರಿತು. ದಿನಾಂಕ 26-06-2025 ಗುರುವಾರದಂದು ನೆಡೆದ ಈ ಕಾರ್ಯವನ್ನು ಕಲಾ ಪ್ರೇಮಿಗಳ ಮೆಚ್ಚುಗೆಗೆ ಕಾರಣವಾಯಿತು.

ಶ್ರೀಕ್ಷೇತ್ರದಲ್ಲಿ ತಾಳಮದ್ದಲೆ. Read More »

ಶ್ರೀಕ್ಷೇತ್ರ ಇಟಗಿಯಲ್ಲಿ‌ ಪ್ರತಿ ಅಮವಾಸ್ಯೆಯಂದು ಸಂಕಲ್ಪ ಸಿದ್ಧಿ ರಥೋತ್ಸವ

ಬಿಳಗಿ ಸೀಮಾ ಮಹತೋಬಾರ ಶ್ರೀ ರಾಮೇಶ್ವರ, ಶ್ರೀ ಅಮ್ಮನವರು ಮತ್ತು ಶ್ರೀ ವಿಠ್ಠಲದೇವ ಶ್ರೀಕ್ಷೇತ್ರ ಇಟಗಿ,ಅಖಿಲಾಂಡಕೋಟಿ ಬ್ರಹ್ಮಾಂಡ ನಾಯಕ ಶ್ರೀ ಇಷ್ಟಿಕಾಧೀಶ್ವರನಿಗೆ ಪ್ರತಿ ಅಮವಾಸ್ಯೆಯಂದು ನೆಡೆಯುವ ಸಂಕಲ್ಪ ಸಿದ್ಧಿ ರಥೋತ್ಸವ ಹಾಗೂ ತತ್ವಾಧಿವಾಸ ಹೋಮ,‌ ಶತರುದ್ರ ಹೋಮ ಮತ್ತು ಮಹಾಬಲಿ‌ ಪ್ರಧಾನ ಈ ಎಲ್ಲಾ ಕಾರ್ಯಾಕ್ರಮಗಳು ಸಂಪನ್ನಗೊಂಡವು.ಜ್ಯೇಷ್ಠ ಮಾಸದ ಅಮವಾಸ್ಯೆಯಂದು ದಿನಾಂಕ 25-06-2025 ಬುಧವಾರ ವಾದ ಇಂದು ಶ್ರೀದೇವರಿಗೆ ಸಮರ್ಪಿಸಲಾಯಿತು.ಬಿಳಗಿಯ ಭಜನಾ ತಂಡವು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ತನ್ನ ಸೇವೆಯಲ್ಲಿ, ಹೊಸದೊಂದು ಮೆರಗನ್ನು ಮೂಡಿಸಿತು.ಅನುದಿನವೂ ನೆಡೆಯುವ “ಪರ್ಯಾಪ್ತಿ”

ಶ್ರೀಕ್ಷೇತ್ರ ಇಟಗಿಯಲ್ಲಿ‌ ಪ್ರತಿ ಅಮವಾಸ್ಯೆಯಂದು ಸಂಕಲ್ಪ ಸಿದ್ಧಿ ರಥೋತ್ಸವ Read More »

“ಪರ್ಯಾಪ್ತಿ ಪ್ರಸಾದ ಭೋಜನ”ದ‌ ಸೇವಾ ವಿವರಗಳು:

ಭೋಜನದ ಸಮಯ-ಮಧ್ಯಾಹ್ನ 1.15 ರಿಂದ 2.30 ಶ್ರೀಕ್ಷೇತ್ರದಲ್ಲಿ ಅನುದಿನವೂ‌ ನೆಡೆಯುವ ಪರ್ಯಾಪ್ತಿ ಅನ್ನಪ್ರಸಾದ ಭೋಜನದ ಸೇವಾ ವಿವರಗಳು‌ ಹೀಗಿವೆ.ಒಂದು ದಿನದ ಅನ್ನದಾನ ಸೇವೆಯ ಪ್ರಾಯೋಜಕತ್ವ-3001 ರೂ10 ಜನ ಶಿವಭಕ್ತರಿಗೆ ಅನ್ನದಾನಸೇವೆ-501 ರೂ25 ಜನ ಶಿವಭಕ್ತರಿಗೆ ಅನ್ನದಾನಸೇವೆ-1251 ರೂಪ್ರಸಾದ ಭೋಜನಕ್ಕಾಗಿ ಅಕ್ಕಿ, ಕಾಯಿ, ತರಕಾರಿ ಮುಂತಾದ ಸುವಸ್ತುಗಳನ್ನು ಸಲ್ಲಿಸಬಹುದು. ಹುಟ್ಟಿದ ದಿನ, ಮದುವೆಯ ದಿನ, ಹಿರಿಯರ ನೆನಪಿಗಾಗಿ ಪ್ರಸಾದ ಭೋಜನ ಸೇವೆಗೆ ಆರ್ಥಿಕ ಸಹಕಾರ ನೀಡಿ ಆಚರಿಸಿಕೊಳ್ಳಬಹುದು.ಮೊಕ್ತೇಸರ ಮಂಡಳಿಶ್ರೀಕ್ಷೇತ್ರ ಇಟಗಿ

“ಪರ್ಯಾಪ್ತಿ ಪ್ರಸಾದ ಭೋಜನ”ದ‌ ಸೇವಾ ವಿವರಗಳು: Read More »

ಇಟಗಿಯಲ್ಲಿ ತಾಳಮದ್ದಲೆ.

ದಿನಾಂಕ 26-06-2025 ಗುರುವಾರ ಯಕ್ಷಗಾನ ತಾಳಮದ್ದಲೆ ಪ್ರಸಂಗ “ಭೀಷ್ಮಾರ್ಜುನ” (ಕವಿ ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ)ಮಧ್ಯಾಹ್ನ 3 ಗಂಟೆ ಇಂದ. ಅತಿಥಿ‌ಭಾಗವತರಾಗಿ ಹೆಸರಾಂತ ಶ್ರೀ ರಾಘವೇಂದ್ರ ಆಚಾರ್ಯ ಜನ್ಸಾಲೆ ಹಾಗೇಯೇ ಹಿಮ್ಮೇಳ ಮುಮ್ಮೇಳದಲ್ಲಿ ಉತ್ತಮ‌‌ ಕಲಾವಿದರ ಕೂಡುವಿಕೆಯಲ್ಲಿ ನೆರವೇರಲಿದೆ.ದೇವಸ್ಥಾನದ ಸಭಾಭವನದಲ್ಲಿ‌ ನೆಡೆಯುವ ಈ ಕಾರ್ಯಕ್ರಮಕ್ಕೆ ಶ್ರೀ‌ರಾಮೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಮತ್ತಿ ಭಜಕ ವೃಂದ ಹಾಗೂ ಯಕ್ಷಾಭಿಮಾನಿ ಬಳಗ ಇಟಗಿ, ಲಂಬಾಪುರ.(ಉಚಿತ ಪ್ರವೇಶ)

ಇಟಗಿಯಲ್ಲಿ ತಾಳಮದ್ದಲೆ. Read More »

ಶ್ರೀಕ್ಷೇತ್ರ ಇಟಗಿಯಲ್ಲಿ‌ ಈ ಅಮವಾಸ್ಯೆಯಂದು ಸಂಕಲ್ಪ ಸಿದ್ಧಿ ರಥೋತ್ಸವ

ಬಿಳಗಿ ಸೀಮಾ ಮಹತೋಬಾರ ಶ್ರೀ ರಾಮೇಶ್ವರ, ಶ್ರೀ ಅಮ್ಮನವರು ಮತ್ತು ಶ್ರೀ ವಿಠ್ಠಲದೇವ ಶ್ರೀಕ್ಷೇತ್ರ ಇಟಗಿ,ಅಖಿಲಾಂಡಕೋಟಿ ಬ್ರಹ್ಮಾಂಡ ನಾಯಕ ಶ್ರೀ ಇಷ್ಟಿಕಾಧೀಶ್ವರನಿಗೆ ಪ್ರತಿ ಅಮವಾಸ್ಯೆಯಂದು ಸಂಕಲ್ಪ ಸಿದ್ಧಿ ರಥೋತ್ಸವ ಹಾಗೂ ತತ್ವಾಧಿವಾಸ ಹೋಮ,‌ ಶತರುದ್ರ ಹೋಮ ಮತ್ತು ಮಹಾಬಲಿ‌ ಪ್ರಧಾನ ಈ ಎಲ್ಲಾ ಕಾರ್ಯಾಕ್ರಮಗಳು ನೆರವೇರಲಿದೆ.ಜ್ಯೇಷ್ಠ ಮಾಸದ ಅಮವಾಸ್ಯೆಯಂದು ದಿನಾಂಕ 25-06-2025 ಬುಧವಾರ ನೆಡೆಯುವ ಈ ಕಾರ್ಯಕ್ರಮಕ್ಕೆ ಭಕ್ತರೆಲ್ಲರೂ ಸಹಕಾರ ನೀಡಬೇಕಾಗಿ ವಿನಂತಿ.ಅನುದಿನವೂ ನೆಡೆಯುವ “ಪರ್ಯಾಪ್ತಿ” ಪ್ರಸಾದ ಭೋಜನ ಸೇವೆ ಇರುತ್ತದೆ, ಭಕ್ತರೆಲ್ಲರೂ ಸಹಕರಿಸ ಬೇಕಾಗಿ ವಿನಂತಿ.ಸರ್ವರಿಗೂ‌‌

ಶ್ರೀಕ್ಷೇತ್ರ ಇಟಗಿಯಲ್ಲಿ‌ ಈ ಅಮವಾಸ್ಯೆಯಂದು ಸಂಕಲ್ಪ ಸಿದ್ಧಿ ರಥೋತ್ಸವ Read More »

ಶ್ರೀಕ್ಷೇತ್ರ ಇಟಗಿಯಲ್ಲಿ ಇಂದು ಯೋಗ ದಿನಾಚರಣೆ

ಆರೋಗ್ಯ ಭಾರತಿ ಕರ್ನಾಟಕ (ಉತ್ತರ ಪ್ರಾಂತ) ಮತ್ತು ರಾಮೇಶ್ವರ ವಿದ್ಯೋದಯ‌ ಪ್ರೌಢ ‌ಶಾಲೆ ಇಟಗಿಯ‌ ಸಹಯೋಗದಲ್ಲಿ ಶ್ರೀದೇವಸ್ಥಾನದ ಸಭಾಭವನದಲ್ಲಿ ವಿಶ್ವ ಯೋಗ ದಿನವನ್ನು ಆಚರಿಸಲಾಯಿತು. ಸಾಮೂಹಿಕ ಯೋಗದ ನಂತರ ವೇದಿಕೆಯಲ್ಲಿ‌ ಸಮಾರೋಪ ಸಮಾರಂಭವು ಆರೋಗ್ಯ ಭಾರತಿ ಕರ್ನಾಟಕ ಉತ್ತರ ಪ್ರಾಂತ್ಯದ ಸಿದ್ದಾಪುರ ಶಾಖೆಯ ಕಾರ್ಯದರ್ಶಿಗಳು ಶ್ರಿ ಮಾಬ್ಲೇಶ್ವರ ಭಟ್ಟರು‌(ಯಕ್ಷಗಾನ ಕಲಾವಿದರು) ಮತ್ತು ಅಧ್ಯಕ್ಷರಾಗಿ ರಾ.ವಿ. ಪ್ರೌಢ ಶಾಲೆಯ ಮುಖ್ಯಾದ್ಯಾಪಕರು ಡಿ.ಜಿ.ಪೂಜಾರ ಮತ್ತು ಮುಖ್ಯ ವಕ್ತಾರರಾಗಿ ಯೋಗದ ಬಗ್ಗೆ ವಿಶೇಷ ಮಾಹಿತಿಯನ್ನು ನೀಡಲು‌ ಶ್ರೀ ವೆಂಕಟ್ರಮಣ ಹೆಗಡೆ ಹೊನ್ನೆಮಡಿಕೆ

ಶ್ರೀಕ್ಷೇತ್ರ ಇಟಗಿಯಲ್ಲಿ ಇಂದು ಯೋಗ ದಿನಾಚರಣೆ Read More »

Scroll to Top